ಸನಿಹ ದಿಗಂತ!
March 1, 2008 by pbanagi
ಇತ್ತ ಚಿತ್ತ ಹಾಯಿಸಿ…
ಗಿಜಿಗುಡುವ ಮಾರ್ಕೇಟ್ ರಸ್ತೆ
ಮೊನ್ನೆಯ ಮಳೆಯಿಂದಾದ ಕೆಸರು ಕುಂಡಗಳು
ಅನಾಥವಾಗಿ ಬಿದ್ದ ಕೊಳೆತ ಕೋಸು
ಉರುಳುರುಳಿ ಬಂದ ನಿಂಬೆ ಹಣ್ಣು
ದೇಖರಿಕೆಯಿಲ್ಲದೇ ನಾರುವ
ಕಾರ್ಪೋರೇಶನ್ ತೊಟ್ಟಿ
ಪ್ಲಾಸ್ಟಿಕ್ ಧೂಮಕ್ಕೆ ತಲೆಯಾನಿಸುವ ಮತ್ತರು
ಚಿಂತೆಯೇಕೋ ಗೆಳೆಯಾ..? ಎಂಬ ಸಮಾಧಾನಗಳು
ರಪ್ಪಡಕ ಕೆಂಪು ಮೆತ್ತಿದ ಸ್ತಂಭ
ತೂತು ಬಿದ್ದ ನಾಲ್ಕಾರು ಪತಾಕೆಗಳು
ಬುಡದಲ್ಲಿ ಒಣಗಿದ ಮೈಸೂರ ಮಲ್ಲಿಗೆಯ ಹಾರ
ಅಲ್ಲಲ್ಲೇ ಕಕ್ಕಕ್ಕೆ ಕುಳಿತ ಸಿಂಬಳ ಸುರುಕ ಕೂಸುಗಳು
ಅವರ ಚೊಣ್ಣದಲ್ಲಿ ಬಣ್ಣಗಳ ದಿಬ್ಬಣ
ಮರೆಮಾಚಲು ಸಮರ್ಥವಾದ ಸೆರಗಿಲ್ಲದೇ
ಉಬ್ಬಿ ಕಾಣುವ ಕಡು ಕಪ್ಪು ಚೆಲುವೆಯ ಸ್ತನ
ರೆಪ್ಪೆಯಾಡಿಸದೇ ದೃಷ್ಟಿ ನೆಟ್ಟ ಪುಂಡರು
ನಿನ್ನದೆನ್ನಲು ತನುವೂ ಇಲ್ಲ, ಮನವೂ ಇಲ್ಲ
ಕಂಗಳಲ್ಲಿನ ಕನಸುಗಳೆಲ್ಲಾ ಸತ್ತು ತೇಲುತ್ತಿವೆ!
ದೂರದಲ್ಲೆಲ್ಲೋ ಚುನಾವಣಾ ಭಾಷಣ
ಮೇರಾ ಭಾರತ್ ಮಹಾನ್…
ಮೈಕ್ ಒದರುತ್ತಿದೆ ಬದಿಯಲ್ಲಿ…………
ಟುರುಗುಟ್ಟುವ ಜಾತ್ರೆಯ ಉದ್ದನೆಯ ಪಿಸ್ತೂಲುಗಳು!
ಒಂದೇ ಮೊಳೆಯಲ್ಲಿ ತೂಗುವ, ಮುರಿದ ಫ್ರೇಮಿನ
ಒಡೆದ ಗಾಜಿನ, ಫೋಟೋದಡಿ ನಸು ನಗುವ ಗಾಂಧಿ
ಇತ್ತ ಚಿತ್ತ ಹಾಯಿಸಿ,
ಪಟ್ಟ ತೊಟ್ಟವರೇ…
ಹೇವರವ ಹೈರಾಣಾಗಿಸಿ
ಕೃಪೆ ತೋರಿರಿ…
ಕೊಳೆತ ಟೋಮೆಟೊ, ಒಡೆದ ಮೊಟ್ಟೆ …..
ಇದನ್ನೆಲ್ಲ ಎಲ್ಲಿಗೆ ಬಿಟ್ಟೆ ಗುರು….
irali mundina dinakke itkondiddeni. neenu bartiyalla adakke…jatege innastu tegondu baa. jasti idre chennagirutte.
praveen